Thursday, April 16, 2015

ಸತ್ತರೆ ಸಾಯಲಿ ಬಿಡಿ ನಮ್ಮ


ರೈತ ಮತ್ತು ಯೋಧ ನಮ್ಮ ಜೀವನದ ಪ್ರಾಮುಖ್ಯ ಬ್ರಹಸ್ಪತಿಗಳು.
ಒಬ್ಬ ಅನ್ನದಾತ ಇನ್ನೊಬ್ಬ ನಮ್ಮನ್ನು ಕಾಯುವವ.
ಇವರಿಬ್ಬರೂ ಸಂತಸದಿಂದರೆ ನಾವೂ ಸಂತಸದಿಂದಿದ್ದೇವು. ನಾವು ತಿನ್ನುವ ಅನ್ನ ಇವರೀರ್ವರ ಋಣದಲ್ಲಿದೆ.
ಆ ಋಣವನ್ನು ತೀರಿಸುವ ಅವಕಾಶವೆಂದರೆ ಇವರಿಬ್ಬರನ್ನು ಸಂತಸದಿಂದಿರುವಂತೆ ಮಾಡುವುದು ಅವರ ಕನಿಷ್ಟ ಅವಶ್ಯಕಥೆ ಪೂರೈಸುವ ಮೂಲಕ.
ಆದರೆ ನಾವು ಹಾಗೆ ಮಾಡುತ್ತಿದ್ದೇವೆಯೇ..?
ನಮ್ಮ ರಾಜಕೀಯ ಮುತ್ಸದ್ದಿಗಳು ಮತ್ತು ವ್ಯಾಪಾರೀ ದುರಂಧರರು ಮತ್ತು ಇವರ ಬಾಲಬಡುಕರನ್ನು ಸಾಕುವುದರಲ್ಲಿಯೇ ನಮ್ಮೆಲ್ಲಾ ಬೆವರು ಆವಿಯಾಗುತ್ತಲಿದೆ.
ಅಲ್ಪ ಸ್ವಲ್ಪ ಉಳಿದ ಸಮಯ ನಮ್ಮ ಸ್ವಾರ್ಥಕ್ಕೆ...
ಪ್ರತಿಕ್ಷಣ ಅವರೀರ್ವರ ಕಗ್ಗೊಲೆಯಾಗುತ್ತಲಿದೆ...    
ಅವರನ್ನು ಉಳಿಸಲು ಸಮಯ ಮನಸ್ಸು ಛಾತಿ ನಮ್ಮಲ್ಲಿದೆಯೇ..?
ಸಾವಿನ ಕ್ಷಣಗಳು

ರೈತನ
ಈ ಕ್ಷಣದ ಹಸಿವಿನ ಜತೆ
ಗ್ರೀಷ್ಮದ ಕರಿ ನೆರಳು
ಸ್ವಾರ್ಥ ಸಂಸಾರದ
ಈ ನನ್ನ ಬದುಕಿನಲ್ಲಿ
ಕಸುವಿಲ್ಲದ ಕೈಗಳಿಗೆ ಸಿಗುವುದು
ತನ್ನವರ ಆಸರೆಯಿಲ್ಲದ
ವಿಷಾದದ ಮರಳ ಸೊಉಧ
ಕದಡುತ್ತಿರುವ ಜಾಗತೀಕರಣದ ಜಗದಲ್ಲಿ
ಬಾಚಿಕೊಂಡ ಶೋಷಣೆಯ ಕರಾಳ ಕೈಗಳು,
ಕಲುಷಿತ ಬೀಜದ,ಸಾಲಸೋಲದ
ನೆಪದಲ್ಲಿ ನೆಲ,ಜಲ
ಮಣ್ಣು, ಕಲ್ಲು, ಮರ, ಲೂಟಿ
ಬೆಟ್ಟದಂತಿರುವ ಕಷ್ಟಗಳೆಡೆಯಲ್ಲೇ
ದಿಕ್ಕೆಟ್ಟ ಏಕಾಂಗಿಯ
ಸ್ಥಬ್ದವಾದ ಗತಿ

ಸಾಕೆನಿಸಿತು ನನಗೆ
ಈ ಸೈನೀಕ ಜೀವನದ

ಸಾವು ಬದುಕಿನ ಜೂಜು
ವಾಸ್ತವಿಕತೆಯ ಇದಿರು ನಾಳಿನ
ಕನಸುಗಳು ಅರ್ಥವಿಹೀನ
ಬಾವುಕ ಆತ್ಮ ಸಮರ್ಪಣೆ
ಸಂಸಾರ,ದೇಶ ಪ್ರೇಮಗಳೆಲ್ಲ
ಜೀವನದ ಅರ್ಥಗಳಾಗಿಯೂ
ಜತೆಯಲ್ಲೇ ವ್ಯರ್ಥ ಸಾಯುತ್ತಿವೆ
ಗತಿ ಪ್ರಾಪ್ತಿಗೆ ಕಾಯುತಿರುವ
ಸಾವಿರಾರು ದಿಕ್ಕೆಟ್ಟ, ರಕ್ತ ಸಿಕ್ತ
ಅರೆ ಬರೆ ದೇಹಗಳು
ನಿದ್ದೆಯೂ ಸಮೀಪಿಸಲು ಹೆದರುತಿಹ
ಸುತ್ತಲಿನ ನಗ್ನಾತಿನಗ್ನ ಮಲೆಗಳು
ಹೆಪ್ಪುಗಟ್ಟಿದ ಬಿಳಿ ಮಂಜು
ಗತಿ ಶೀಲ ಎಲರು

ಜೀವನ ಕ್ಷಣಿಕವಾಗುತ್ತಿದೆ
ಎಲ್ಲವೂ ಕ್ಷಣದಲ್ಲೇ ಸ್ಥಬ್ದವಾಗಲು
ಇನ್ನೂ ಉಳಿದು ಮಾಡುವದೇನನ್ನು
ಸತ್ತರೆ ಸಾಯಲಿ ಬಿಡಿ ನನ್ನ
ಮತ್ತೆ ಹುಟ್ಟಿ ನಿಮ್ಮ ಋಣ ತೀರಿಸಲು

1 comment:

  1. 'ವಾಸ್ತವಿಕತೆಯ ಇದಿರು ನಾಳಿನ
    ಕನಸುಗಳು ಅರ್ಥವಿಹೀನ'
    ಮಾರ್ಮಿಕಕವಾದ ಸಾಲುಗಳು ಸಾರ್.

    ಜೈ ಜವಾನ್... ಜೈ ಕಿಸಾನ್...

    ReplyDelete