Saturday, March 28, 2015

ತ್ಯಾಂಪ ತ್ಯಾಂಪಿಯರ ಸಲ್ಲಾಪ

ತ್ಯಾಂಪ ತ್ಯಾಂಪಿಯರ ಸಲ್ಲಾಪ



ಐ ಮಿಸ್ ಯೂ
ಯಾಕೋ ತ್ಯಾಂಪ ತ್ಯಾಂಪಿಯ ಮೇಲೆ ತುಂಬಾನೇ ಕೋಪದಿಂದಿದ್ದ.
ಅವಳ ಚಿತ್ರವನ್ನು ಎದುರಿಗಿಟ್ಟು ಅದಕ್ಕೆ ಚೂರಿ ಎಸೆಯುವ ಪ್ರಾಕ್ಟೀಸ್ ಮಾಡ್ತಾ ಇದ್ದ.
ಪ್ರತಿ ಬಾರಿಯೂ ಮಿಸ್ ಆಗುತ್ತಿತ್ತು ಟಾರ್ಗೆಟ್
ಆಗಲೇ ತ್ಯಾಂಪಿಯ ಕರೆ ಬಂತು.
ರೀ ಏನ್ ಮಾಡ್ತಾ ಇಡ್ದ್ದೀರಾ..?
ತ್ಯಾಂಪ ಸ್ವಲ್ಪವೂ ಯೋಚಿಸದೇ ಉತ್ತರಿಸಿದ:
ನಿನ್ನೇ ಮಿಸ್ ಮಾಡ್ಕೋತಾ ಇದ್ದೆ ಕಣೇ
ನಿನ್ನ ನೋಡಿದರೂ ಸಮಸ್ಯೆಯೇ ಮಾಯ
ತ್ಯಾಂಪಿ: ಡಾಲಿಂ.. ಯಾಕೆ ನೀನು ನನ್ನ ಫೋಟೋ ಹತ್ರಾನೇ ಇಟ್ಕೊಂಡಿರ್ತೀಯಾ, ನಾನೆಂದರೆ ಅಷ್ಟು ಪ್ರೀತಿನಾ ನಿಂಗೆ?
ತ್ಯಾಂಪ : ಹೌದು ಕಣೇ, ಅದ್ಯಾಕೋ ನಿನ್ನ ಚಿತ್ರ ನೋಡಿದರೆ ಸಾಕು, ಎಂತಹ ಸಮಸ್ಯೆಯೂ ಕರಗಿ ನೀರಾಗಿಬಿಡುತ್ತೆ..
ತ್ಯಾಂಪಿ: ನೋಡಿದ್ಯಾ, ನಾನು ನನ್ನ ಚಿತ್ರ .......... ಎಂತಹ ಪವಾಡ ಅಲ್ಲವೇ ನಿನ್ನ ಪಾಲಿಗೆ?
ತ್ಯಾಂಪ: ಎಂತಹಾ ಪವಾಡವೂ ಅಲ್ಲ, ಪ್ರತಿ ಬಾರಿ ಸಮಸ್ಯೆ ಎದುರಾದಾಗಲೆಲ್ಲಾ, ನಿನ್ನ ಫೋಟೋ ನೋಡಿ ಈ ಸಮಸ್ಯೆಗಿಂತ ದೊಡ್ಡದೇನಲ್ಲವಲ್ಲ ಎಂದುಕೊಳ್ಳುತ್ತೇನೆ. ಸಮಸ್ಯೆ ತಕ್ಷಣ ಮಾಯ.

ಇದು ನಿಮಗೆ
ತ್ಯಾಂಪಿ : ನಿಮಗೆ ವೈಫ್ ನ್ ಅರ್ಥ ಗೊತ್ತಾ..?
ತ್ಯಾಂಪ: ಯಾಕೆ ಗೊತ್ತಿಲ್ಲ..?
ತ್ಯಾಂಪಿ: ಹೇಳಿ..!!
ತ್ಯಾಂಪ: ವಿಥೌಟ್ ಇನ್ಪಾರ್ಮೇಶನ್ ಫೈಟಿಂಗ್ ಎವರ್
ತ್ಯಾಂಪಿ: ಅಲ್ಲಲ್ಲ..
ತ್ಯಾಂಪ: ಮತ್ತೆ ... ಮತ್ತೆ
ತ್ಯಾಂಪಿ: ನಾನು ಹೇಳಲಾ..?
ತ್ಯಾಂಪ: ಹೇಳು
ತ್ಯಾಂಪಿ: ವಿದ್ ಈಡಿಯಟ್ ಪಾರ್ ಎವರ್


ಭಾರತ ರತ್ನ

ಬೆಳಿಗ್ಗೆ ಬೆಳಿಗ್ಗೆ ತ್ಯಾಂಪಿ ತ್ಯಾಂಪನ ಬಳಿ ಕಾಫಿ ತಿಂಡಿ ಏನು ಮಾಡಬೇಕೆಂದು ಕೇಳಲು ಬಂದಳು.
ಸಂಜೀವ್ ಕಪೂರ ನ ಖಾನ ಕಜಾನ ನೋಡುತ್ತಿದ್ದ ತ್ಯಾಂಪಿಗೆ ಇದೊಂದು ಅಂಟು ಜಾಡ್ಯ ಎಲ್ಲಿಂದಲೋ ಅಂಟಿ ಕೊಂಡಿತ್ತು.
ಹೀಗೇ ಕೇಳಿದಳು ದೂರದರ್ಶನ ನೋಡುತ್ತಾ..
ಅಲ್ಲರೀ
ತ್ಯಾಂಪ ಖುಷಿಯಾದ..
ಹೇಳು ದಾಲಿಂ
ಅಲ್ಲ ಆ ಬಿಹಾರಿಯವರಿಗೆ ಭಾರತ ರತ್ನ ಸಿಕ್ಕಿತಲ್ಲಾ
ಅಲ್ಲ ಕಣೇ ಹೆಸರಾದರೂ ಸರಿಯಾಗಿ ಹೇಳು ಅವರು ಬಿಹಾರಿ ಅಲ್ಲ. ಅಟಲ್ ಬಿಹಾರಿ
ಎಲ್ಲಾ ಒಂದೇ ಬಿಡಿ, ಅಲ್ಲ ಅವರಿಗೆ ಭಾರತ ರತ್ನ ಸಿಕ್ಕಿತಲ್ಲಾ..
ಹೌದು, ಭಾರತದಲ್ಲಿನ ನಾಗರೀಕರಿಗೆ ಸಿಗೋ ಅತ್ಯುಚ್ಚ ಮೆಡಲ್ ಕಣೇ
ಹೌದು ಅವರಿಗೆ ಯಾಕೆ ಸಿಕ್ಕಿತು ಅಂತ..?
ಅಂದರೆ..?
ಅಲ್ಲ ಅದೇ ಅವರು ಅಂತ ಯಾವ ಕೆಲ್ಸ ಮಾಡಿದರೂ ಅಂತ ..?
ತ್ಯಾಂಪ: ಅವರು ಮದುವೆ ಆಗಲೇ ಇಲ್ಲವಲ್ಲ ಅದಕ್ಕೇ..!!!
.....................
ತದ ನಂತರ ....
ತ್ಯಾಂಪನಿಗೆ ತಿಂಡಿ ಬಿಡಿ.....ಕಾಫೀನೂ ಸಿಗಲಿಲ್ಲವಂತೆ
ಅಂತದ್ದೇನು ಹೇಳಿದೆ ತಾನು ಅಂತ ಅವನಿಗೆ ಅರ್ಥ ಆಗಲೇ ಇಲ್ಲವಂತೆ
ನೀವಾದರೂ ತಿಳಿಸಿ...


No comments:

Post a Comment